Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಅಪ್ಪು ಇನ್ನಿಲ್ಲ - Actor Puneeth Rajkumar No More - ಚಿಕಿತ್ಸೆ ಫಲಕಾರಿಯಾಗದೆ ಮರಣ



ನಟ ಪುನೀತ್  ರಾಜ್ ಕುಮಾರ್ ಇನ್ನಿಲ್ಲ

ಕನ್ನಡದ ಪವರ್ ಸ್ಟಾರ್ ಎಂದೆ ಪ್ರಸಿದ್ದಿಯಾಗಿದ್ದ ಪುನೀತ್ ರಾಜ್ ಕುಮಾರ್ ಇಂದು ( ಅ.29,2021 ) 2: 30 ರ ವೇಳೆಗೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ತಮ್ಮ ಮನೆಯ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ತೀವ್ರ ಹೃದಯಘಾತವಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ 11:30 ರ ವೇಳೆಗೆ ದಾಖಲಾಗಿದ್ದರು. ಸುಮಾರು 3 ಗಂಟೆಗಳ ಕಾಲ ಚಿಕಿತ್ಸೆಯನ್ನು ಪಡೆದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.



          ವಿಕ್ರಂ ಆಸ್ಪತ್ರೆಯ ಬಳಿ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಆರೋಗ್ಯವಾಗಿ ವಾಪಸ್ಸು ಬರಲಿ ಎಂದು ಬೆಳಿಗ್ಗೆಯಿಂದ ದೇವರಲ್ಲಿ ಪ್ರಾರ್ಥಸಿಕೊಂಡು ವಿಕ್ರಂ ಆಸ್ಪತ್ರೆಯ ಮುಂದೆ ಕಾಯುತ್ತ ನಿಂತಿದ್ದರು, ಆದರೆ ಅಭಿಮಾನಿಗಳ ಕೂಗು ದೇವರಿಗೆ ಕೇಳಲಿಲ್ಲ, ಪುನೀತ್ ರವರ ಸಾವಿನ ಸುದ್ದಿ ಕೇಳಿ ನೊಂದು ಕಣ್ಣೀರಿಡುತ್ತಿದ್ದಾರೆ.

          ನಟ ಪುನೀತ್ ರವರು ಆಸ್ಪತ್ರೆಗೆ ದಾಖಲಾದ ವಿಷಯ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಚಿತ್ರರಂಗದ ಎಲ್ಲಾ ಕಲಾವಿದರು ಆಸ್ಪತ್ರೆಗೆ ಪುನೀತ್ ರವರನ್ನು ನೋಡಲು ಧಾವಿಸಿ ಬಂದರು, ಆದರೆ ಪುನೀತ್ ರವರ ಸಾವಿನ ಸುದ್ದಿ ಮುಟ್ಟಿದ ಕೂಡಲೇ ಎಲ್ಲರ ಕಣ್ಣಲ್ಲೂ ಕಣ್ಣೀರು ತುಂಬಿತ್ತು.

ಪುನೀತ್ ರಾಜ್ ಕುಮಾರ್ ರವರು ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆ ಪಡೆದಿದ್ದರು, ಯಾರಿಗೂ ನೋವು ಮಾಡದ ವ್ಯಕ್ತಿ, ಹೊಸ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದ ಉತ್ಸಾಹಿ.

          ಪುನೀತ್ ರಾಜ್ ಕುಮಾರ್ ರವರು ರಾಜಕೀಯ ವ್ಯಕ್ತಿಗಳಿಗೂ ಕೂಡ ತುಂಬಾ ಹತ್ತಿರವಾಗಿದ್ದವರು, ಪುನೀತ್ ರವರ ಸಾವಿನ ಸುದ್ದಿ ಕೇಳಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಸಿ.ಎಂ ಬಸವರಾಜ ಬೊಮ್ಮಾಯಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ನಟ ಪುನೀತ್ ರವರ ಪಾರ್ಥೀವ ಶರೀರವನ್ನು ಸದಾಶಿವನಗರದ ಅವರ ನಿವಾಸಕ್ಕೆ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ.

_______________________________________


ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್ ಕುಮಾರ್.



 ನಟ ಸಾರ್ವಭೌಮ ಎಂದೆನಿಸಿಕೊಂಡ ಡಾ. ರಾಜ್ ಕುಮಾರ್ ತಮ್ಮ ಸಾವಿನ ಬಳಿಕ ಕಣ್ಣಿನ ದಾನ ಮಾಡಿ ಅಂಧರಿಗೆ ದೇವರಾಗಿದ್ದರು, ರಾಜ್ ಕುಮಾರ್ ಬದುಕಿದ್ದಾಗಲು ಅಂಧರಿಗೆ ಕಣ್ಣಿನ ದಾನ ಮಾಡಿ ಎಂಬ ಸಂದೇಶವನ್ನು ಇಡೀ ನಾಡಿನ ಜನತೆಗೆ ಸಂದೇಶವನ್ನು ನೀಡಿದ್ದರು.

ಈಗ ಅವರ ಪುತ್ರ ಪುನೀತ್ ರಾಜ್ ಕುಮಾರ್ ಬದುಕಿದ್ದಾಗಲೂ ಅಪ್ಪನ ದಾರಿಯಲ್ಲಿ ನಡೆದು ತೋರಿಸಿ, ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದು ತೋರಿಸಿದ್ದಾರೆ. ತಮ್ಮ ಸಾವಿನ ಬಳಿಕ ತಮ್ಮ ಕಣ್ಣಗಳನ್ನು ದಾನ ಮಾಡಿ ಅಂಧರ ಪಾಲಿಗೆ ದೇವರೆನಿಸಿಕೊಂಡಿದ್ದಾರೆ ಹಾಗೂ ತಮ್ಮ ಅಭಿಮಾನಿಗಳಿಗೆ ಆದರ್ಶವಾಗಿದ್ದಾರೆ.

_____________________________________________________

ಜನನ:

ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರವರ ಕಿರಿಯ ಪುತ್ರರಾಗಿ ಪುನೀತ್ ರಾಜ್ ಕುಮಾರ್ ರವರು ಮಾರ್ಚ್ 17 1975 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಇವರ ಹಿರಿಯ ಸಹೋದರರುಗಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ರವರು ಕೂಡ ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರು.

_________________________________________

ಮರಣ:

ದಿನಾಂಕ 29-10-2021 ರಂದು ತಮ್ಮ 46 ನೇ ವಯಸ್ಸಿಗೆ ತೀವ್ರ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಮರಣ ಹೊಂದಿದರು.

_______________________________________

ಸಿನಿ ಪಯಣ:

ನಟ ಪುನೀತ್ ರಾಜ್ ಕುಮಾರ್ ರವರು ಬಾಲ ನಟನಾಗಿ ಹಲವು ಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು, ತಮ್ಮ ಬಾಲ್ಯದಲ್ಲೇ ‘ಬೆಟ್ಟದ ಹೂವು’ ಚಿತ್ರದ ರಾಮುವಿನ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದವರು.

ಅವರ ಬಾಲ್ಯದ ಚಿತ್ರಗಳು ಇಂದಿಗೂ ಪ್ರೇಕ್ಷಕರಿಗೆ ಮನರಂಜಿಸುತ್ತವೆ.

ಚಿತ್ರಗಳು

ಬಿಡುಗಡೆಯಾದ ವರ್ಷ

ಪ್ರೇಮದ ಕಾಣಿಕೆ

1976

ಸನಾದಿ ಅಪ್ಪಣ್ಣ

1977

ಎರಡು ನಕ್ಷತ್ರಗಳು

1983

ಬೆಟ್ಟದ ಹೂವು

1985

ಚಲಿಸುವ ಮೋಡಗಳು

1982

ಯಾರಿವನು

1984

ಪರಶುರಾಮ

1989

ಭಕ್ತ ಪ್ರಹ್ಲಾದ

1983

ಭಾಗ್ಯವಂತ

1981

ಹೊಸ ಬೆಳಕು

1982

 

ನಂತರ ತಮ್ಮ ಸಿನಿಜೀವನವನ್ನು ಮುಂದುವರೆಸಿ ನಾಯಕನಟನಾಗಿ ಮೊದಲ ಚಿತ್ರವಾದ ‘ಅಪ್ಪು’ (2002) ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದರು. ಈ ಚಿತ್ರವು ಭರ್ಜರಿ ಯಶಸ್ಸನ್ನು ಕಂಡಿತು.

ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸಲ್ಲಿ ಚಿರವಾಗಿದ್ದಾರೆ. ಅವರು ನಾಯಕನಟನಾಗಿ ಅಭಿನಯಿಸಿದ ಚಿತ್ರಗಳು ಕೆಳಗಿನಂತಿವೆ.

 

ಚಿತ್ರಗಳು

ಬಿಡುಗಡೆಯಾದ ವರ್ಷ

ಅಪ್ಪು

2002

ಅಭಿ

2003

ವೀರ ಕನ್ನಡಿಗ

2004

ಮೌರ್ಯ

2004

ಆಕಾಶ್

2005

ನಮ್ಮ ಬಸವ

2005

ಅಜಯ್

2006

ಅರಸು

2007

ಮಿಲನ

2007

ಬಿಂದಾಸ್

2008

ವಂಶಿ

2008

ರಾಜ್

2009

ರಾಮ್

2009

ಪೃಥ್ವಿ

2010

ಜಾಕಿ

2010

ಹುಡುಗರು

2011

ಪರಮಾತ್ಮ

2011

ಅಣ್ಣಬಾಂಡ್

2012

ಯಾರೇ ಕೂಗಾಡಲಿ

2012

ನಿನ್ನಿಂದಲೇ

2014

ಪವರ್

2014

ಮೈತ್ರಿ

2015

ರಣ ವಿಕ್ರಮ

2015

ಚಕ್ರವ್ಯೂಹ

2015

ದೊಡ್ಮನೆ ಹುಡ್ಗ

2016

ರಾಜಕುಮಾರ

2017

ಅಂಜನಿಪುತ್ರ

2017

ನಟಸಾರ್ವಭೌಮ

2019

ಯುವರತ್ನ

2021

ಜೇಮ್ಸ್

-

ದ್ವಿತ್ವ

-

 

ನಾಯಕನಟರಲ್ಲದೇ ಕನ್ನಡದ ಕಿರುತೆರೆಯ “ಕನ್ನಡದ ಕೋಟ್ಯಾಧಿಪತಿ”ಯ ಕಾರ್ಯಕ್ರಮದ ನಿರೂಪಣೆಯಲ್ಲೂ ಹೆಚ್ಚಿನ ಖ್ಯಾತಿಗಳಿಸಿದ್ದರು. ಅಷ್ಟಲ್ಲದೇ ಹಲವು ಸಿನಿಮಾಗಳಲ್ಲಿ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

________________________________________________

ಸಾಂಸಾರಿಕ ಜೀವನ:

ಪುನೀತ್ ರಾಜ್ ಕುಮಾರ್ ರವರು ಸಿನಿಜೀವನವಲ್ಲದೇ ತಮ್ಮ ವೈಯಕ್ತಿಕ ಜೀವನವನ್ನೂ ಬಹಳ ಅಚ್ಚುಕಟ್ಟಾಗಿ ಯಾವುದೇ ರೀತಿಯ ಕಪ್ಪುಚುಕ್ಕೆಯನ್ನು ಪಡೆಯದೇ ನಡೆಸಿದ್ದಾರೆ.

ತಮ್ಮ 24 ನೇ ವಯಸ್ಸಿನಲ್ಲಿ ಅಶ್ವಿನಿಯವರನ್ನು ಮದುವೆಯಾಗಿ, ಇಬ್ಬರು ಹೆಣ್ಣುಮಕ್ಕಳಾದ ಧೃತಿ ಮತ್ತು ವಂದಿತಾಗೆ ಪ್ರೀತಯ ತಂದೆಯಾಗಿದ್ದಾರೆ.

 ______________________________________


ಪ್ರಶಸ್ತಿಗಳು:

ನ್ಯಾಶನಲ್ ಫಿಲ್ಮ್ ಅವಾರ್ಡ್ಸ್

ವರ್ಷ

ಚಿತ್ರ

1985

ಬೆಟ್ಟದ ಹೂವು

 

ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ಸ್

ವರ್ಷ

ಚಿತ್ರ

ಪ್ರಶಸ್ತಿ

1982-83

ಚಲಿಸುವ ಮೋಡಗಳು

ಉತ್ತಮ ಬಾಲನಟ

1983–84

ಎರಡು ನಕ್ಷತ್ರಗಳು

ಉತ್ತಮ ಬಾಲನಟ

2007–08

ಮಿಲನ

ಬೆಸ್ಟ್ ಆಕ್ಟರ್

2010–11

ಜ್ಯಾಕೀ

ಬೆಸ್ಟ್ ಆಕ್ಟರ್

 

ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್

ವರ್ಷ

ಚಿತ್ರ

ಪ್ರಶಸ್ತಿ

2011

ಹುಡುಗರು

ಬೆಸ್ಟ್ ಆಕ್ಟರ್

2012

ಅಣ್ಣಾ ಬಾಂಡ್

ಬೆಸ್ಟ್ ಆಕ್ಟರ್

2013

ಯಾರೇ ಕೂಗಾಡಲಿ

ಯೂತ್ ಐಕಾನ್ ಆಫ್ ಸೌತ್ ಇಂಡಿಯನ್ ಸಿನಿಮಾ

2016

ರಣ ವಿಕ್ರಮ

ಬೆಸ್ಟ್ ಆಕ್ಟರ್

2017

ದೊಡ್ಡ್ಮನೆ ಹುಡ್ಗ

ಬೆಸ್ಟ್ ಆಕ್ಟರ್

2018

ರಾಜಕುಮಾರ

ಬೆಸ್ಟ್ ಆಕ್ಟರ್

2019

ನಟಸಾರ್ವಭೌಮ

ಬೆಸ್ಟ್ ಆಕ್ಟರ್

 

ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್

ವರ್ಷ

ಚಿತ್ರ

ಪ್ರಶಸ್ತಿ

1985

ಬೆಟ್ಟದ ಹೂವು

ಉತ್ತಮ ಬಾಲ್ಯ ನಟ

2007

ಅರಸು

ಬೆಸ್ಟ್ ಆಕ್ಟರ್

2011

ಹುಡುಗರು

ಬೆಸ್ಟ್ ಆಕ್ಟರ್

2012

ಅಣ್ಣಾ ಬಾಂಡ್

ಬೆಸ್ಟ್ ಆಕ್ಟರ್

2014

ಪವರ್

ಬೆಸ್ಟ್ ಆಕ್ಟರ್

2015

ರಣ ವಿಕ್ರಮ

ಬೆಸ್ಟ್ ಆಕ್ಟರ್

2016

ದೊಡ್ಡ್ಮನೆ ಹುಡ್ಗ

ಬೆಸ್ಟ್ ಆಕ್ಟರ್

2017

ರಾಜಕುಮಾರ

ಬೆಸ್ಟ್ ಆಕ್ಟರ್

 

_____________________________________________________


ಅವರ ಸೇವೆಗಳು:

·        26 – ಅನಾಥಾಶ್ರಮ

·        45- ಉಚಿತ ಶಾಲೆ

·        16- ವೃದ್ಧಾಶ್ರಮ

·        19- ಗೋಶಾಲೆ

·        1800 ಮಕ್ಕಳ ಸಂಪೂರ್ಣ ಉಚಿತ ಶಿಕ್ಷಣ

·        ಶಕ್ತಿಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ

 

 


No comments:

Post a Comment

Write Something about PK Music

new1

new2

new5