Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು Ep#11 | Most Inspirational Words



ದಾರಿದ್ರ್ಯ ಡಾಂಗುಡಿಯಿಟ್ಟಾಗ
ಧೈರ್ಯ ಕಳೆದುಕೊಳ್ಳದಿದ್ದರೆ ಸಹನಶಕ್ತಿ ಹೆಚ್ಚುತ್ತದೆ
- ಬಂಕಿಮ ಚಂದ್ರ

ಹಣದಿಂದ ಭೋಜನವನ್ನು ಖರೀದಿಸಬಹುದು
ಆದರೆ ಹಸಿವನ್ನಲ್ಲ
- ಮುನಿ ತರುಣಸಾಗರ

ರೋಗ ಇರುವುದಾದರೆ ಶತ್ರುಗಳು ಯಾಕೆ
- ಭರ್ತೃ ಹರಿ

ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ
ನಾವೆಂದೂ ದೊಡ್ಡವರಾಗುವುದಿಲ್ಲ
- ವಲ್ಲಭಬಾಯಿ ಪಟೇಲ್

ಉದ್ಯೋಗದಂತಹ ಬಂಧು ಬೇರೊಂದಿಲ್ಲ
ಇದರ ಜೊತೆ ಇದ್ದರೆ ದುಃಖ ಹತ್ತಿರ ಬರುವುದಿಲ್ಲ
- ಭರ್ತೃ ಹರಿ

ಕಾರ್ಯನಿರತನಿಗೆ ಕೆಲಸವೇ ವಿಶ್ರಾಂತಿ
ಸೋಮಾರಿಗೆ ಸುಮ್ಮನೆ ಕುಳಿತಿರುವುದೇ ಕೆಲಸ
- ಸ್ವಾಮಿ ವಿವೇಕಾನಂದ

ಕಾರ್ಯ ಕುಶಲನಾದ ಮನುಷ್ಯನಿಗೆ
ಯಶಸ್ಸು ಮತ್ತು ಹಣಕ್ಕೆ ಕೊರತೆ ಇರುವುದಿಲ್ಲ
- ಕಾಳಿದಾಸ

ಕೆಟ್ಟವರ ಸಹವಾಸ
ಮುಳ್ಳುಗಳ ನಡುವೆ ಸಿಲುಕಿಕೊಂಡಂತೆ
- ಸ್ವಾಮಿ ರಾಮತೀರ್ಥ

ಅಜ್ಞಾನದಂತಹ ಪ್ರಬಲ ಶತ್ರು ಬೇರಿಲ್ಲ
- ಚಾಣಕ್ಯ

ಕಾಲ ಸರಿಯುತ್ತದೆ ಎಂದು ಹೇಳುತ್ತಾರೆ
ಇಲ್ಲ
ನಾವು ಸರಿಯುತ್ತೇವೆ ಕಾಲ ಉಳಿಯುತ್ತದೆ
- ಭರ್ತೃಹರಿ

ಯಾವ ತಾಯಿ ತಂದೆ ತಮ್ಮ ಮಕ್ಕಳಿಗೆ
ಅಕ್ಷರಾಭ್ಯಾಸ, ಶಿಕ್ಷಣ ನೀಡುವುದಿಲ್ಲವೋ
ಅಂತಹ ಶತ್ರುಗಳು ಬೇರಿಲ್ಲ
- ರೂಸೋ

ವಿಪತ್ತು ನಮ್ಮನ್ನು ಅಜ್ಞಾನಿಯನ್ನಾಗಿಸುತ್ತದೆ,
ನಾವು ಎಷ್ಟು ಬಲಿಷ್ಟರು ಎನ್ನುವುದನ್ನು
ಅದು ತೋರಿಸುತ್ತದೆ
- ಜವಾಹರಲಾಲ್ ನೆಹರು

No comments:

Post a Comment

Write Something about PK Music

new1

new2

new5